ರಾಜಕಾರಣ

ರಾಜಕಾರಣವೆಂದರೆ
ಏನೆಂದುಕೊಂಡಿರಿ
ವಿನಾಕಾರಣ ಹೊಡೆದಾಟ
ಬಡಿದಾಟ ದೊಂಬರಾಟ
ಕಣ್ಣು ಹಾಯಿಸಿ ತಿಹಾಸದತ್ತ
ಗದ್ದುಗೆಯೇರಲು ಅನಿವಾರ್ಯ
ಕೊಲೆ, ಸುಲಿಗೆ ರಕ್ತಪಾತ
ಚಾಣಕ್ಯನ ನೀತಿತಂತ್ರ
ಹಣ ಅಧಿಕಾರ ದಾಹಕ್ಕೆ
ಮುಗ್ಧ ಪ್ರಾಣಗಳ ಬೆಲೆ
ಮಾನವೀಯ ಸಂಬಂಧಗಳು
ಬತ್ತಿ ಹೋದ ಸೆಲೆ
ಬಾಯಲ್ಲಿ ಭಗವದ್ಗೀತೆ
ಕೈಯಲ್ಲಿ ಮಚ್ಚುಗತ್ತಿ
ಮಾತಿನ ಬಂಡವಾಳ ಹಾಕಿ
ಮತದಾರರ ವ್ಯಾಪಾರ
ಪೊಳ್ಳು ಆಶ್ವಾಸನೆಗಳ ಸಮಾಧಿ
ಸಿಂಹಾಸನ ಪ್ರತಿಷ್ಠಾನ
ತತ್ತ್ವ ಸಿದ್ಧಾಂತ ಆದರ್ಶಗಳೆಲ್ಲಿ
ಸೂತ್ರ ಕಿತ್ತ ಗಾಳಿಪಟ
ರಾಮ ರಹೀಮರಲ್ಲಿ
ಯೇಸು ಬುದ್ಧರಲ್ಲಿ
ಭೇದಭಾವದ ಬಿತ್ತನೆ
ಕೋಮು ಭ್ರಷ್ಟಾಚಾರದ ಬೋಧನೆ
ಅಧರ್ಮ ಅನೀತಿಗಳ ಕಾರಸ್ಥಾನ
ನ್ಯಾಯನಿಷ್ಠೆಗಳ ಪರ್ಯಾವಸಾನ
ರಾಜಕಾರಣವೆಂದರೆ ಇಷ್ಟೆ
ಸ್ವಾರ್ಥ ರಾಜಕಾರಣಿಗಳ ಪ್ರತಿಷ್ಠೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅರ್ಧ ಮಂಚ
Next post ಯಾಕೆ?

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys